Home » News » 50 ವರ್ಷಗಳ ಅನ್ಯಾಯಕ್ಕೆ ಇಂದು ಸಿಡಿಲು! ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗರಿಂದ ವ್ಯಾಪಕ ಒತ್ತಾಯ!”

50 ವರ್ಷಗಳ ಅನ್ಯಾಯಕ್ಕೆ ಇಂದು ಸಿಡಿಲು! ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗರಿಂದ ವ್ಯಾಪಕ ಒತ್ತಾಯ!”

by CityXPress
0 comments

ಗದಗ:
ಜಿ.ಎಸ್. ಪಾಟೀಲ್ ಗೆ ಸಚಿವ ಸ್ಥಾನ ಬೇಡಿಕೆ – ಗಜೇಂದ್ರಗಡದಲ್ಲಿ ಉದ್ವಿಗ್ನತೆ; ಇಬ್ಬರು ಕಾರ್ಯಕರ್ತರಿಂದ ಆತ್ಮಹತ್ಯೆ ಯತ್ನ

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ರೋಣ ಶಾಸಕರಾದ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ತೀವ್ರ ಸ್ವರೂಪ ಪಡೆದಿದೆ. ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯ ವೇಳೆ, ಇಬ್ಬರು ಕಾರ್ಯಕರ್ತರಿಂದ ಆತ್ಮಹತ್ಯೆಗೆ ಯತ್ನ ನಡೆದಿದ್ದು, ಸ್ಥಳದಲ್ಲಿ ಕೆಲಕ್ಷಣ ಗಲಾಟೆ-ಆತಂಕದ ವಾತಾವರಣ ಉಂಟಾಯಿತು.

ಪ್ರತಿಭಟನೆ ಗಜೇಂದ್ರಗಡದ ಕಾಲಕಾಲೇಶ್ವರ ಸರ್ಕಲ್ ಬಳಿಯಲ್ಲಿ ನಡೆಯುತ್ತಿದ್ದ ವೇಳೆ, ಕಾರ್ಯಕರ್ತರಾದ ಸಂಗಪ್ಪ ತೇಲಿ ಮತ್ತು ರವಿಕುಮಾರ್ ದಿಢೀರ್ ತಮ್ಮ ಮೈಮೇಲೆ ಮೊದಲಿಗೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ಅಕಸ್ಮಿಕವಾಗಿ ನಡೆದ ಈ ಘಟನೆ ಕಾರ್ಯಕರ್ತರು, ಮಹಿಳಾ ಘಟಕದ ಸದಸ್ಯರು ಮತ್ತು ಸ್ಥಳೀಯರಲ್ಲಿ ಗಾಬರಿ ಹುಟ್ಟಿಸಿತು.

ಸ್ಥಳದಲ್ಲಿದ್ದ ಇತರೆ ಕಾರ್ಯಕರ್ತರು ಸಮಯಕ್ಕೆ ತಕ್ಕಂತೆ ಪ್ರತಿಕ್ರಿಯಿಸಿ, ಡಿಸೇಲ್ ಡಬ್ಬಿಗಳನ್ನು ಕಸಿದುಕೊಂಡು ಇಬ್ಬರನ್ನು ತಡೆದು, ದೊಡ್ಡ ಅನಾಹುತ ಸಂಭವಿಸುವುದನ್ನು ತಪ್ಪಿಸಿದರು. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

banner

ಕಾರ್ಯಕರ್ತರ ಅಸಮಾಧಾನದ ಹಿನ್ನೆಲೆ

ಜಿ.ಎಸ್. ಪಾಟೀಲ್ ಅವರು ಕಳೆದ 50 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಇದುವರೆಗೂ ಸಚಿವ ಸ್ಥಾನ ದೊರೆತಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್ ನ ಸ್ಥಳೀಯ ಬೆಂಬಲಿಗರಲ್ಲಿ ಗಾಢವಾಗಿದೆ.

ಈ ಹಿನ್ನೆಲೆಯಲ್ಲಿ, ಪಾಟೀಲ್ ಅವರ ಅಭಿಮಾನಿಗಳು ಹೈಕಮಾಂಡ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, “ಈ ಬಾರಿ ರೋಣ ಕ್ಷೇತ್ರಕ್ಕೂ – ಜಿ.ಎಸ್. ಪಾಟೀಲ್‌ಗೂ ನ್ಯಾಯವಾಗಲೇಬೇಕು” ಎಂದು ಒತ್ತಾಯಿಸಿದರು.
ಮನವಿ ಗಮನಕ್ಕೆ ತರಲು, ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.

ಸಂಭವಿಸಿದ ಉದ್ವಿಗ್ನತೆ

ಪ್ರತಿಭಟನೆಯ ಮಧ್ಯೆ ನಡೆದ ಆತ್ಮಹತ್ಯೆ ಯತ್ನದಿಂದ ಕೆಲ ಸಮಯ ಗಜೇಂದ್ರಗಡದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಇಬ್ಬರು ಕಾರ್ಯಕರ್ತರು ಡಿಸೇಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರೂ, ಸ್ಥಳೀಯರ ಚುರುಕಿನ ಕಾರಣದಿಂದ ತಕ್ಷಣ ರಕ್ಷಣೆ ದೊರಕಿತು.

ಈ ಘಟನೆಯ ನಂತರ ಪೊಲೀಸ್ ಇಲಾಖೆ ಹೆಚ್ಚುವರಿ ನಿಗಾವಹಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದೆ.

ಉಗ್ರ ಹೋರಾಟದ ಎಚ್ಚರಿಕೆ

ಕಾರ್ಯಕರ್ತರು, ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಈ ನಡುವೆ ಮತ್ತೊಬ್ಬ ಅಭಿಮಾನಿಯೂ ಆತ್ಮಹತ್ಯೆಗೆ ಯತ್ನಿಸಿದ್ದ ವರದಿ ಹೊರಬಂದಿದ್ದು, ಈ ವಿಚಾರವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಗಜೇಂದ್ರಗಡ ಪಟ್ಟಣದಲ್ಲಿ ನಡೆದ ಈ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb