Home » News » “ಬೇಲಿಯೇ ಹೊಲ ಮೇಯಿತು!” ಲೋಕಾಯುಕ್ತ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ‌ ಶಾಮೀಲು!? – ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿಗೆ ಎತ್ತಂಗಡಿ!”

“ಬೇಲಿಯೇ ಹೊಲ ಮೇಯಿತು!” ಲೋಕಾಯುಕ್ತ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ‌ ಶಾಮೀಲು!? – ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿಗೆ ಎತ್ತಂಗಡಿ!”

by CityXPress
0 comments

ಬೆಂಗಳೂರು, ಜೂನ್ 17:
ರಾಜ್ಯದಲ್ಲಿ ಭ್ರಷ್ಟಾಚಾರವನ್ನು ತಡೆದು ಶುದ್ಧ ಆಡಳಿತ ಕಲ್ಪಿಸಬೇಕು ಎಂಬ ಭಾರವಾದ ಹೊಣೆಗಾರಿಕೆಯನ್ನು ಹೊತ್ತಿರುವ ಲೋಕಾಯುಕ್ತ ಇಲಾಖೆನೇ ಈಗ ಭ್ರಷ್ಟಾಚಾರದ ಕಳಂಕದಿಂದ ತತ್ತರಿಸುತ್ತಿದೆ. ‘ಬೇಲಿಯೇ ಹೊಲ ಮೇಯಿದ’ ರೀತಿಯಲ್ಲಿ, ಕರ್ನಾಟಕ ಲೋಕಾಯುಕ್ತ Bengaluru ನಗರದ ಎಸ್ಪಿ ಮ. ಶ್ರೀನಾಥ್ ಜೋಶಿ ವಿರುದ್ಧವೇ ಕೋಟಿ ಕೋಟಿ ಹಣದ ದುರ್ಬಳಕೆಯ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಪೆಟ್ಟು ನೀಡಿದಂತಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಎಸ್‌ಆರ್‌ಪಿಯ ಮಾಜಿ ಕಾನ್ಸ್‌ಟೇಬಲ್ ನಿಂಗಪ್ಪ ಎಂಬಾತ ಪ್ರಮುಖ ಪಾತ್ರವಹಿಸಿದ್ದಾನೆ. ತಾನು ಲೋಕಾಯುಕ್ತ ಡಿವೈಎಸ್‌ಪಿ ಎಂಬ ನಕಲಿ ಪರಿಚಯ ನೀಡಿ, ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ‌ ಎನ್ನಲಾಗಿದೆ.

ಆದರೆ ಇಲ್ಲಿ ನಿಂಗಪ್ಪ ಕೇವಲ ಒಬ್ಬನೇ ಮೆರೆಯುತ್ತಿದ್ದಿಲ್ಲ. ಅವನು ವಸೂಲಿ ಮಾಡಿದ ಹಣದಲ್ಲಿ ಕೆಲವೊಂದಿಷ್ಟು ರಶ್ಮಿಕೆ ಪೂರೈಸುವಂತೆ, ಅಸಲಿ ಲೋಕಾಯುಕ್ತ ಅಧಿಕಾರಿಗಳಿಗೂ ಪಾಲು ಕೊಡುತ್ತಿದ್ದಾನೆ ಎಂಬ ಆಘಾತಕಾರಿ ಮಾಹಿತಿ ತನಿಖೆ ಮೂಲಕ ಹೊರಬಂದಿದೆ. ಈ ತಕ್ಷಣವೇ ಸಂಬಂಧಪಟ್ಟ ದಾಖಲೆಗಳ ಮೇಲೆ ಕಾರ್ಯೋನ್ಮುಖವಾದ ಲೋಕಾಯುಕ್ತವೇ, ತಮ್ಮದೇ ಇಲಾಖೆ ಎಸ್ಪಿ ಶ್ರೀನಾಥ್ ಜೋಶಿಯವರನ್ನ ಸೇವೆಯಿಂದ ತೆಗೆದು‌ ಹಾಕಿದ್ದಾರೆ.

ಟೆಲಿಫೋನ್ ಮಾತುಕತೆಗಳಿಂದ ಬಯಲಾಗಿರುವ ಭ್ರಷ್ಟಾಟ ಲೋಕಾಯುಕ್ತ ತನಿಖೆ ಕೈಗೊಂಡಾಗ, ನಿಂಗಪ್ಪ ಹಾಗೂ ಶ್ರೀನಾಥ್ ಜೋಶಿ ನಡುವಿನ ಕರೆ ವಿವರಗಳು (‘ಕಾಲ್ ಡಿಟೇಲ್ಸ್’) ಲಭ್ಯವಾಗಿದ್ದು, ಅವುಗಳಲ್ಲಿ ದಾಳಿಗಳ ಕುರಿತು ಪೂರ್ವಸಿದ್ಧತೆ, ಹಣದ ಲೆಕ್ಕಾಚಾರ ಮತ್ತು ಪಾವತಿ ಸಂಭಾಷಣೆ ನಡೆದಿರುವುದು ಬಯಲಾಗಿದೆ.

banner

ಇಷ್ಟಲ್ಲದೆ, ಭ್ರಷ್ಟಾಚಾರದಲ್ಲಿ ಸಂಗ್ರಹಿಸಿದ ಹಣವನ್ನು ನೇರವಾಗಿ ಖಾತೆಗಳಲ್ಲಿ ಇಡುವ ಬದಲು, ಬಿಟ್‌ಕಾಯಿನ್ ಮೂಲಕ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಪರ್ವದಲ್ಲೇ ಇನ್ನೊಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಹೆಸರು ಕೂಡ ತನಿಖಾಧಿಕಾರಿಗಳಿಗೆ ಮುಟ್ಟಿದ್ದು, ಪ್ರಕರಣ ಮತ್ತಷ್ಟು ಗಂಭೀರ ದಿಕ್ಕಿನಲ್ಲಿ ಸಾಗುತ್ತಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ?

ಈ ತಕ್ಷಣವೇ ಈ ವಿಷಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೂ ಬಂದಿದೆ. ಆರೋಪಿಗಳನ್ನ ತಕ್ಷಣವೇ ಸೇವೆಯಿಂದ ತೆಗೆದು ಹಾಕಲಾಗಿದೆಯಾದರೂ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಿದ್ದರೆ, ಸರ್ಕಾರ ಮೃದು ಧೋರಣೆಯನ್ನ ತಾಳಿದೆಯೆ ಎಂಬ ಪ್ರಶ್ನೆ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

ಅಬಕಾರಿ ಇಲಾಖೆ ಮತ್ತು ಬಿಡಿಎ ಅಧಿಕಾರಿಗಳ ಜೊತೆ ಲಿಂಕ್..

ಬಿಡಿಎ (ಬೆಂಗಳೂರು ಡೆವಲಪ್ಮೆಂಟ್ ಅಥಾರಿಟಿ) ಮತ್ತು ಅಬಕಾರಿ ಇಲಾಖೆಯ ಹಲವಾರು ಅಧಿಕಾರಿಗಳಿಗೆ ದಾಳಿ ನೆಪದಲ್ಲಿ ಕರೆ ಮಾಡಿ ಹಣವಸೂಲಿ ಮಾಡಲಾಗಿದೆ ಎಂಬ ದೂರುಗಳ ಹಿನ್ನೆಲೆ, ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದ ವಿಶೇಷ ತಂಡ ನಿಂಗಪ್ಪನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿರುವಾಗ ಈ ಭ್ರಷ್ಟ ಪ್ರಾಥಮಿಕ ಸಂಚು ಬಹಿರಂಗವಾಗಿದೆ.

ಒಟ್ಟಾರೆ ಹುದ್ದೆಯ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡು, ಜನರ ಸುರಕ್ಷತೆಗಾಗಿ ಕಲ್ಪಿಸಲಾಗಿರುವ ಯಂತ್ರಾಂಗವೇ ಜನರ ನಂಬಿಕೆ ತಗ್ಗಿಸುವ ರೀತಿಯಲ್ಲಿ ದುಷ್ಕೃತ್ಯ ಎಸಗಿದ ಈ ಪ್ರಕರಣ, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ದೊಡ್ಡ ಟಕೀತು ಹಾಕಿದೆ. ಈಗ ಸಾರ್ವಜನಿಕರ ಪ್ರಶ್ನೆ:
“ಯಾರನ್ನ ನಂಬಬೇಕು?”

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb