Sunday, April 20, 2025
Homeಸುತ್ತಾ-ಮುತ್ತಾಪಂಚಮಸಾಲಿ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ!

ಪಂಚಮಸಾಲಿ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ!

ಗದಗ:ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹಾಗೂ ಯುವ ಘಟಕ ಇಂದು ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳನ್ನ ನೇಮಕ ಮಾಡಿತು.

ಗದಗ ತಾಲೂಕು ಗ್ರಾಮೀಣ ಯುವ ಘಟಕ ಅಧ್ಯಕ್ಷರಾಗಿ ಶ್ರೀ.ಮಂಜುನಾಥ್ ಗುಡದೂರ,⁠ಪ್ರಧಾನ ಕಾರ್ಯದರ್ಶಿಗಳಾಗಿ ಸಂತೋಷ ಬಳ್ಳಾರಿ,ಸಂಘಟನಾ ಕಾರ್ಯದರ್ಶಿಗಾಗಿ ಮಂಜುನಾಥ್ ಗದಗಿನ,ಉಪಾಧ್ಯಕ್ಷರಾಗಿ ಶಿವಾನಂದ ಇನಾಮತಿ,⁠ಉಪಾಧ್ಯಕ್ಷರಾಗಿ ಮಂಜುನಾಥ್ ಕರುಗಲ್ ಸರ್ವಾನುಮತದಿಂದ ಆಯ್ಕೆಯಾದರು. 

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಗೌರವಾನ್ವಿತ ವ್ಯಕ್ತಿಗಳಾದ ಕರುನಾಡು ಕಾಯಕ ಸಮ್ಮಾನ 2024 ಸಮಾಜ ಸೇವೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕರಾದ ಶ್ರೀ ನೀಲಕಂಠಪ್ಪ ಮಲಕಾರ್ಜುನಪ್ಪ ಕೊಟಗಿ ಹಾಗೂ ಪಂಚಮಸಾಲಿ ಸಮಾಜದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಗುತ್ತಿಗೆದಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಸವರಾಜ್ ತುಳಿ ರವರಿಗೆ ಸನ್ಮಾನ ಮಾಡಲಾಯಿತು. 

ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ.ಕೆ ಕೆ ಮಲಗೌಡರ್, ಸಮಾಜದ ಹಿರಿಯರಾದ ಬಿ ಎಸ್ ಚಿಂಚಳ್ಳಿ, ಸಿ ಬಿ ಪಲ್ಲೇದ್, ಎಸ್ ವಿ ಪಲ್ಲೇದ್,ಭದ್ರೇಶ ಕುಸಲಾಪುರ,ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಸಂತೋಷ.ಅಕ್ಕಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments