Home » News » ಗದಗನ ಪೆಟ್ರೋಲ್ ಬಂಕ್‌ನಲ್ಲಿ ರಾಬರಿ: ಸಿಬ್ಬಂದಿಗೆ ಖಾರದ ಪುಡಿ ಎರಚಿ, ಹಣದ ಬ್ಯಾಗ್ ದೋಚಿದ ದುಷ್ಕರ್ಮಿಗಳು!

ಗದಗನ ಪೆಟ್ರೋಲ್ ಬಂಕ್‌ನಲ್ಲಿ ರಾಬರಿ: ಸಿಬ್ಬಂದಿಗೆ ಖಾರದ ಪುಡಿ ಎರಚಿ, ಹಣದ ಬ್ಯಾಗ್ ದೋಚಿದ ದುಷ್ಕರ್ಮಿಗಳು!

by CityXPress
0 comments

ಗದಗ/ಬೆಟಗೇರಿ, ಜುಲೈ 10: ಗದಗ-ಬೆಟಗೇರಿ ಅವಳಿ ನಗರದ ಶರಣಬಸವೇಶ್ವರ ನಗರದ ಸಾಯಿ ಪೆಟ್ರೋಲ್ ಬಂಕ್‌ನಲ್ಲಿ ನಿನ್ನೆ ರಾತ್ರಿ ನಡೆದ ರಾಬರಿ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಳ್ಳರು ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕು ತೋರಿಸಿ ಬೆದರಿಕೆ ಹಾಕಿ ಹಣದ ಬ್ಯಾಗ್ ದೋಚಿದ ಘಟನೆ ಬೆಳಕಿಗೆ ಬಂದಿದೆ.

ಪೆಟ್ರೋಲ್ ಬಂಕ್‌ನ ಸಿಬ್ಬಂದಿ ಫಕೀರೇಶ ಮಲಗಿಕೊಂಡಿದ್ದ ಸಮಯದಲ್ಲಿ, ಶಂಕಿತ ಮೂವರು ದುಷ್ಕರ್ಮಿಗಳು ಗಾಜಿನ ಬಾಗಿಲು ಒಡೆದು ಬಲವಂತವಾಗಿ ಒಳನುಗ್ಗಿದ್ದಾರೆ. ಬಳಿಕ ಫಕೀರೇಶನ ಕಣ್ಣಿಗೆ ಖಾರದ ಪುಡಿ ಎರಚಿ, ಹತ್ತಿರವಿದ್ದ ಚಾಕುವಿನಿಂದ ಬೆದರಿಸಿ, “ಹಣ ನೀಡದಿದ್ದರೆ ಚುಚ್ಚುತ್ತೇನೆ” ಎಂದು ಬೆದರಿಕೆಗೆ ಎಡೆಕೊಟ್ಟಿದ್ದಾರೆ.

ಅಲ್ಲದೆ, ನಿನ್ನೆ ಸಂಜೆಯ ಸಮಯದಲ್ಲಿ ದಿನದ ಕಲೆಕ್ಷನ್ ಮಾಡಿದ ನಗದು ಹಣವನ್ನು ಹೊಂದಿದ್ದ ಬ್ಯಾಗ್ ಅನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಪೆಟ್ರೋಲ್ ಬಂಕ್ ಮಾಲೀಕರು ಸ್ಥಳಕ್ಕೆ ಬಂದು ಬಾಗಿಲು ಒಡೆದು ಬಿದ್ದಿರುವುದನ್ನು ಗಮನಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

ಇನ್ನು ಪೆಟ್ರೋಲ್ ಬಂಕ್ ಸುತ್ತಲೂ ಇರುವ ನಾಲ್ಕೂ ಮನೆಗಳಲ್ಲಿ‌ ಸಿಸಿಟಿವಿ‌ ಇವೆ. ಆದರೆ ಘಟನೆ ನಡೆದ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಇದ್ದ ಹಿನ್ನೆಲೆ,‌ ಸಿಸಿಟಿವಿ ದೃಶ್ಯಾವಳಿಗಳು ಸೆರೆಯಾಗಿಲ್ಲ.

banner

ಘಟನೆ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸ್ಥಳೀಯ ಜನತೆ ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವಳಿ ನಗರದಲ್ಲಿ ಸುರಕ್ಷತೆ lax ಆಗುತ್ತಿದೆ ಎಂಬ ಚಿಂತೆ ವ್ಯಕ್ತವಾಗುತ್ತಿದ್ದು, ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb