ಬೆಂಗಳೂರು, ಏಪ್ರಿಲ್ 11:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಬಹು ನಿರೀಕ್ಷಿತ ಜಾತಿವಾರು ಜನಗಣತಿ ವರದಿಯನ್ನು ಮಂಡಿಸಿದರು. ಈ ವರದಿಯ ಮಂಡನೆ ಕಾಂಗ್ರೆಸ್ ಪಕ್ಷದ ಒಳಗೊಂದಿಗೇ ಬಿಜೆಪಿ ಸೇರಿದಂತೆ ಹಲವು ಶಾಸಕರ ವಿರೋಧದ ನಡುವೆಯೂ ನಡೆದಿದೆ.
ಹತ್ತು ವರ್ಷಗಳ ನಿಲುವಿನ ಬಳಿಕ ಈ ವರದಿಗೆ ಇದೀಗ ಮರುಜೀವ ಸಿಕ್ಕಿದೆ. ಮನೆಮನೆಗೆ ತೆರಳದೇ ತಯಾರಿಸಲಾದ ಈ ವರದಿ ಕುರಿತು ಪ್ರತಿಪಕ್ಷಗಳು ಗುಮಾನಿ ವ್ಯಕ್ತಪಡಿಸಿದ್ದು, ಇದರ ಪಾರದರ್ಶಕತೆಯ ಕುರಿತು ಪ್ರಶ್ನೆ ಎತ್ತಿವೆ.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಸಂಪುಟ ಸಭೆಯಲ್ಲಿ ವರದಿ ಕುರಿತಂತೆ ಚರ್ಚೆ ನಡೆದಿದ್ದು, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಉತ್ಕಟ ಚರ್ಚೆಗೆ ಗುರಿಯಾಗುವ ಸಾಧ್ಯತೆ ಇದೆ. ಆದರೆ ವರದಿಯ ಅನುಷ್ಠಾನ ಕುರಿತು ಈ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ‘ಜಾತಿ ಜನಗಣತಿ ಅನುಷ್ಠಾನ’ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
