Sunday, April 20, 2025
Homeರಾಜ್ಯಮುಖ್ಯ ಶಿಕ್ಷಕಿ ಕೊಲೆ:ರೊಟ್ಟಿ ಮಾಡುವ ಮಣೆಯಿಂದ ಹೊಡೆದು ಭೀಕರ ಹತ್ಯೆ!

ಮುಖ್ಯ ಶಿಕ್ಷಕಿ ಕೊಲೆ:ರೊಟ್ಟಿ ಮಾಡುವ ಮಣೆಯಿಂದ ಹೊಡೆದು ಭೀಕರ ಹತ್ಯೆ!

ಗಜೇಂದ್ರಗಡ: ರೊಟ್ಟಿ ಮಾಡುವ ಮಣೆಯಿಂದ (ಕ್ವಾಮಣಗಿ) ತಲೆಗೆ ಹೊಡೆದು ಮುಖ್ಯ ಶಿಕ್ಷಕಿಯನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟ‌ನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ನವನಗರದಲ್ಲಿ ನಡೆದಿದೆ.

ಅನ್ನಪೂರ್ಣ ರಾಠೋಡ್ (54) ಕೊಲೆಯಾದ ಮುಖ್ಯ ಶಿಕ್ಷಕಿಯಾಗಿದ್ದು, ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಮುಖ್ಯ ಶಿಕ್ಷಕಿಯನ್ನ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಮಾಧ್ಯಮಿಕ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಅನ್ನಪೂರ್ಣ ರಾಠೋಡ್, ಸದ್ಯ ರೋಣದ ಬಿಇಒ ಕಚೇರಿಯಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಭೀಕರ ಕೊಲೆಗೆ

ಶಿಕ್ಷಕಿ ಹತ್ಯೆಯಿಂದ ಗಜೇಂದ್ರಗಡ ಪಟ್ಟಣದ ಜ‌ನತೆ ಬೆಚ್ಚಿ ಬಿದ್ದಿದ್ದಾರೆ. ಒಂದು ದಿನದ ಹಿಂದೆಯೇ ಈ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಒಂಟಿ ಮಹಿಳೆಗೆ ರಕ್ಷಣೆ ಇಲ್ವಾ ಅಂತಾ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಅಮಾನವೀಯ ಕೊಲೆಗೆ ನ್ಯಾಯ ಕೊಡಿಸಿ ಅಂತಾ‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments