Home » News » ಮುಂಡರಗಿ: ಶಿಕ್ಷಕರ ಸಮಸ್ಯೆಗಳ ಪರಿಗಣನೆಗೆ ಒತ್ತಾಯ – ಸಮೀಕ್ಷಾ ಕರ್ತವ್ಯದಿಂದ ವಿನಾಯಿತಿ, ಗೌರವಧನ ಹಾಗೂ ಗಳಿಕೆ ರಜೆ ಸೌಲಭ್ಯ ಒದಗಿಸಲು ಮನವಿ..

ಮುಂಡರಗಿ: ಶಿಕ್ಷಕರ ಸಮಸ್ಯೆಗಳ ಪರಿಗಣನೆಗೆ ಒತ್ತಾಯ – ಸಮೀಕ್ಷಾ ಕರ್ತವ್ಯದಿಂದ ವಿನಾಯಿತಿ, ಗೌರವಧನ ಹಾಗೂ ಗಳಿಕೆ ರಜೆ ಸೌಲಭ್ಯ ಒದಗಿಸಲು ಮನವಿ..

by CityXPress
0 comments

ಮುಂಡರಗಿ, ಸೆ.21 – ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7, 2025 ರವರೆಗೆ ಕೈಗೆತ್ತಿಕೊಳ್ಳುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಹಿನ್ನೆಲೆಯಲ್ಲಿ, ಮುಂಡರಗಿ ತಾಲೂಕಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ಮತ್ತು ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡರಗಿ ತಾಲೂಕು ಶಾಖೆ ಭಾರಿ ಮನವಿಯನ್ನು ಸಲ್ಲಿಸಿದೆ.

ತಾಲೂಕು ಸಂಘದ ಪ್ರತಿನಿಧಿಗಳು ತಹಸೀಲ್ದಾರರು, ತಾಲೂಕು ದಂಡಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ, ಸಮೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಎದುರಾಗುತ್ತಿರುವ ಗಂಭೀರ ತೊಂದರೆಗಳನ್ನು ಪ್ರಸ್ತಾಪಿಸಿದರು.

ತೊಂದರೆ ಎದುರಿಸುತ್ತಿರುವ ಶಿಕ್ಷಕರ ವರ್ಗಗಳು
ಮನವಿಯಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಶಿಕ್ಷಕರು, ನಿವೃತ್ತಿ ಅಂಚಿನಲ್ಲಿರುವವರು, ದೈಹಿಕ ಅಂಗವೈಕಲ್ಯ ಹೊಂದಿರುವವರು, ಗರ್ಭಿಣಿಯರು, ಹಸುಗೂಸನ್ನು ಸಾಕುತ್ತಿರುವ ತಾಯಂದಿರು ಹಾಗೂ ಈಗಾಗಲೇ ಬಿ.ಎಲ್.ಒ (ಬೂತ್ ಲೆವೆಲ್ ಅಧಿಕಾರಿ) ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರನ್ನು ಈ ಸಮೀಕ್ಷಾ ಕರ್ತವ್ಯದಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಲಾಯಿತು.

ಗೌರವಧನ ಮತ್ತು ಗಳಿಕೆ ರಜೆಗಾಗಿ ಒತ್ತಾಯ
ಇದೇ ಸಂದರ್ಭದಲ್ಲಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿರುವ ಶಿಕ್ಷಕರಿಗೆ ಕೇವಲ ಗೌರವಧನ ನೀಡುವುದಷ್ಟೇ ಅಲ್ಲ, ಕೆ.ಸಿ.ಎಸ್.ಆರ್ ನಿಯಮಾವಳಿ ಪ್ರಕಾರ ಗಳಿಕೆ ರಜೆ (Earned Leave) ಸೌಲಭ್ಯವನ್ನೂ ಒದಗಿಸಬೇಕೆಂದು ಮನವಿ ಮಾಡಲಾಯಿತು. 2025ರ ಮೇ ತಿಂಗಳಲ್ಲಿ ಕೈಗೆತ್ತಿಕೊಂಡಿದ್ದ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ್ದ ಶಿಕ್ಷಕರಿಗೆ ನೀಡಬೇಕಿದ್ದ ಗೌರವಧನವನ್ನು ಇನ್ನೂ ವಿತರಿಸದಿರುವುದನ್ನು ಸಂಘದ ನಾಯಕರು ತೀವ್ರವಾಗಿ ಖಂಡಿಸಿದರು. ತಕ್ಷಣವೇ ಗೌರವಧನವನ್ನು ಶಿಕ್ಷಕರ ಖಾತೆಗೆ ಜಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.

banner

ರಜಾ ಅವಧಿಯಲ್ಲಿ ಸೇವೆ ಮಾಡಿದ ಶಿಕ್ಷಕರಿಗೆ ನ್ಯಾಯ ಬೇಕು ಪರಿಶಿಷ್ಟ ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಶಾಲಾ ರಜಾದಿನಗಳಲ್ಲಿಯೇ ಕಾರ್ಯನಿರ್ವಹಿಸಿದ ಗಣತಿದಾರರಿಗೆ ನಿಯಮಾವಳಿ ಪ್ರಕಾರ ಗಳಿಕೆ ರಜೆ ಒದಗಿಸಲು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕೆಂದು ಸಂಘದ ಪ್ರತಿನಿಧಿಗಳು ಒತ್ತಾಯಿಸಿದರು.

ಅಧಿಕಾರಿಗಳ ಭರವಸೆ ಮನವಿಗೆ ಸ್ಪಂದಿಸಿದ ತಹಸೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ತೊಂದರೆಗಳನ್ನು ಮನಗಂಡು, ತೀವ್ರ ಅಸ್ವಸ್ಥತೆ, ಅಂಗವೈಕಲ್ಯ, ಗರ್ಭಿಣಿಯರು ಹಾಗೂ ಬಿ.ಎಲ್.ಒ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಮೀಕ್ಷಾ ಕರ್ತವ್ಯದಿಂದ ವಿನಾಯಿತಿ ನೀಡಲಾಗುವುದೆಂದು ಭರವಸೆ ನೀಡಿದರು.
ಇದೇ ವೇಳೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯಕುಮಾರ ಎಲಿವಾಳ ಅವರು, ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರಿಗೆ ನೀಡಬೇಕಾಗಿದ್ದ ಮೊದಲ ಕಂತಿನ ಗೌರವಧನವನ್ನು ಮುಂದಿನ ಎರಡು–ಮೂರು ದಿನಗಳಲ್ಲಿ ಜಮೆಗೊಳಿಸಲಾಗುವುದು ಎಂದು ಘೋಷಿಸಿದರು.

ಈ ವೇಳೆ, ಸಂಘದ ತಾಲೂಕು ಅಧ್ಯಕ್ಷರಾದ ನಾಗರಾಜ ಹಳ್ಳಿಕೇರಿ, ಖಜಾಂಚಿ ಶ್ರೀಧರ ದಾನಿ, ಕಾರ್ಯದರ್ಶಿ ಶಂಕರ ಸರ್ವದೆ, ಮೈಲಾರಪ್ಪ, ಮೃತ್ಯುಂಜಯ ವಿಭೂತಿ, ಎಸ್.ಎಸ್. ಬಿಚ್ಚಾಲಿ, ಮನೋಹರ ಎಸ್., ಮುತ್ತಪ್ಪ ಭಜಂತ್ರಿ, ಜಗದೀಶ ಪತ್ತಾರ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ಶಿಕ್ಷಕರಿಗೆ ಸರ್ಕಾರದಿಂದ ದೊರಕಬೇಕಾದ ಸೌಲಭ್ಯ, ಗೌರವ ಹಾಗೂ ನ್ಯಾಯ ದೊರಕಿಸಲು ಸಂಘ ಬದ್ಧವಾಗಿದೆ ಎಂದು ಸಂಘದ ನಾಯಕರಾದ ಹಳ್ಳಿಕೇರಿ ತಿಳಿಸಿದರು..

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb