Sunday, April 20, 2025
Homeಸುತ್ತಾ-ಮುತ್ತಾKSRTC ಬಸ್ ರಶ್: ವಿದ್ಯಾರ್ಥಿ ಕೆಳಗೆ ಬಿದ್ದು, ಚಕ್ರದಡಿ ಸಿಲುಕಿ ಸಾವು

KSRTC ಬಸ್ ರಶ್: ವಿದ್ಯಾರ್ಥಿ ಕೆಳಗೆ ಬಿದ್ದು, ಚಕ್ರದಡಿ ಸಿಲುಕಿ ಸಾವು

ಗದಗ: ಸಾರಿಗೆ ಸಂಸ್ಥೆಯ ಬಸ್ ಚಕ್ರದಡಿ ಸಿಲುಕಿ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ನಡೆದಿದೆ.

ರಾಘವೇಂದ್ರ (21) ಮೃತ ವಿದ್ಯಾರ್ಥಿಯಾಗಿದ್ದು, ಕೊಣ್ಣೂರಿನಿಂದ ನರಗುಂದ ಪಟ್ಟಣದಲ್ಲಿನ ಕಾಲೇಜಿಗೆ ತೆರಳುತ್ತಿದ್ದ. ರಾಮದುರ್ಗ ಹೊಸಪೇಟೆ ಬಸ್ ಹತ್ತಿದ್ದ ರಾಘವೇಂದ್ರ, ಬಸ್ ಸಾಕಷ್ಟು ರಶ್ ಇದ್ದ ಹಿನ್ನೆಲೆ, ಬಸ್ ನ ಬಾಗಿಲಿನ ಫುಟ್ ಬೋರ್ಡ್ ನಲ್ಲಿ ನಿಂತುಕೊಂಡಿದ್ದ.

ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿಗೆ ಇಳಿಯುತ್ತಿದ್ದಂತೆ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ರಾಘವೇಂದ್ರ ತಲೆ ಮೇಲೆ ಬಸ್ ಹಿಂಬದಿ ಚಕ್ರ ಹರಿದು, ರಾಘವೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments