Headlines

ಭದ್ರತೆ ವಿಚಾರದಲ್ಲಿ ಭಾರತ ಅದೃಷ್ಟಶಾಲಿಯಲ್ಲ: ರಕ್ಷಣಾ ಸಚಿವ!

ನವದೆಹಲಿ: ಶತ್ರುಗಳು ಯಾವಾಗಲೂ ಸಹ ನಮ್ಮ ಮೇಲೆ ಕಣ್ಣಿಟ್ಟಿದ್ದು, ಸೇನಾ ಸಿಬ್ಬಂದಿಗಳು ಸದಾ ಜಾಗರೂಕರಾಗಿರಬೆಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾನುವಾರ ಮಧ್ಯಪ್ರದೇಶದಲ್ಲಿ ಭಾರತೀಯ ಸೇನಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿರೋ ಅವರು,ಸೇನೆ ಸದಾ ಜಾಗರೂಕರಾಗಿರಬೇಕು. ನಮ್ಮ ಉತ್ತರ ಮತ್ತು ಪಶ್ಚಿಮ ಗಡಿಗಳು ನಿರಂತರವಾಗಿ ಸವಾಲುಗಳನ್ನು ಎದುರಿಸುತ್ತಿದ್ದು, ಭಾರತ ಅತ್ಯಂತ ಅದೃಷ್ಟದ ದೇಶವಲ್ಲ ಎಂದಿದ್ದಾರೆ. ನಾವು ಆಂತರಿಕವಾಗಿಯೂ ಸವಾಲುಗಳನ್ನು ಎದುರಿಸುವ ಕಾರಣದಿಂದ ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆಂತರಿಕ ಅಥವಾ ಹೊರಗಿನ ಶತ್ರುಗಳು ಯಾವಾಗಲೂ ಸಕ್ರಿಯವಾಗಿರುತ್ತಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *