ಹುಬ್ಬಳ್ಳಿ:ಇತ್ತೀಚೆಗಂತೂ ಕಳ್ಳರು ರಶ್ ಇರುವ ಬಸ್ಸಗಳನ್ನೇ ತಮ್ಮ ಕೇಂದ್ರ ಸ್ಥಾನ ಮಾಡಿಕೊಂಡಿದ್ದಾರೆ.ಸ್ತ್ರೀ ಶಕ್ತಿ ಪ್ರಾರಂಭವಾದಾಗಿನಿಂದ ಪ್ರತಿ ಬಸ್ ಗಳೂ ಸಹ ಪ್ರಯಾಣಿಕರಿಂದ ತುಂಬಿ ತುಳುಕತ್ತಿವೆ.ಅದರಲ್ಲೂ ಮಹಿಳೆಯರು ಪ್ರಯಾಣಿಸುತ್ತಿರುವ ಸಂಖ್ಯೆ ದಿನನಿತ್ಯ ಏರುತ್ತಲೇ ಇದೆ. ಹೀಗೆ ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಹೌದು,ಬಸ್ ಹತ್ತುವ ವೇಳೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿರುವ ಘಟನೆ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಕಳ್ಳತನ ಹುಬ್ಬಳ್ಳಿ-ಗದಗ ಬಸ್ ನಲ್ಲಿ ನಡೆದ ಘಟನೆಯಾಗಿದ್ದು, ಬಸ್ ಹತ್ತುತ್ತಿದ್ದ ಮಹಿಳೆಯ ಒಟ್ಟು 2.30 ಲಕ್ಷ ಮೌಲ್ಯದ 50 ಗ್ರಾಂ ಮಾಂಗಲ್ಯ ಸರ ಮತ್ತು ಬಳೆ ಕಳ್ಳತನ ಮಾಡಿದ್ದಾರೆ.
ಬೈರಿದೇವರಕೊಪ್ಪದ ಶಾಂತಾದೇವಿ ಮದಗುಣಿಕಿ ಅನ್ನುವವರು ಆಭರಣ ಕಳೆದುಕೊಂಡ ಮಹಿಳೆಯಾಗಿದ್ದು, ಹೊಸೂರು ನಿಲ್ದಾಣದಲ್ಲಿ ಬಸ್ ಹತ್ತುವಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಗದಗ ಬಸ್ ಹತ್ತುತ್ತಿದ್ದ ವೇಳೆ 1.50 ಲಕ್ಷ ಮೌಲ್ಯದ ಮಾಂಗಲ್ಯಸರ ಹಾಗೂ 20 ಗ್ರಾಂ ಬಳೆಗಳನ್ನು ಬ್ಯಾಗಿನಿಂದ ಕದ್ದು ಕಳ್ಳರು ಎಸ್ಕೆಪ್ ಆಗಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.