Home » News » ಮಾಜಿ‌ ಪ್ರಧಾನಿ ಮನಮೋಹನಸಿಂಗ್ ನಿಧನ:ಮುಂಡರಗಿಯಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ

ಮಾಜಿ‌ ಪ್ರಧಾನಿ ಮನಮೋಹನಸಿಂಗ್ ನಿಧನ:ಮುಂಡರಗಿಯಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ

by CityXPress
0 comments

ಮುಂಡರಗಿ: ಮಾಜಿ ಪ್ರಧಾನಿ ಡಾ.ಮನಮೋಹನ‌ಸಿಂಗ್ ನಿಧನರಾದ ಪ್ರಯುಕ್ತ
ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಬೃಂದಾವನ ವೃತ್ತದಲ್ಲಿ ಸ್ಥಳಿಯ ಮುಖಂಡರೆಲ್ಲರೂ ಸೇರಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೈ ಎನ್ ಗೌಡರ, ದೇಶದ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ರವರು ಶ್ರೇಷ್ಠ ಆರ್ಥಿಕ ತಜ್ಞರಾಗಿ ದೇಶದಲ್ಲಿ ಉದಾರಿಕರಣ,ಖಾಸಗಿಕರಣ, ಜಾಗತೀಕರಣ ಮಾಡುವಂತಹ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟವರು. ಆ ಮೂಲಕ ಪ್ರಪಂಚದಲ್ಲಿಯೇ ಇವತ್ತು ಭಾರತ ಆರ್ಥಿಕ ಸ್ಥಿರತೆಯನ್ನು ಕಾಣಲು ಸಾಧ್ಯವಾಗಿದೆ. ಅಂತಹ ಒಬ್ಬ ಮಹಾನ್ ಚೇತನ ಇಂದು ನಮ್ಮನ್ನೆಲ್ಲ ಅಗಲಿದ್ದು ಈ ನಾಡು ಇಂದು ಬಡವಾಗಿದೆ. ಭಗವಂತನು ಇವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಹೇಳಿದರು.

ಇದೇ ವೇಳೆ ಮೌನಾಚರಣೆ ಮಾಡುವ ಮೂಲಕ ಹಲವು ಮುಖಂಡರು ಮನಮೋಹನಸಿಂಗ್ ಅವರ ಜೀವನ ಸಾಧನೆ‌ ಕುರಿತು ಮಾತನಾಡಿ, ಸಂತಾಪ ಸೂಚಿಸಿದರು.

ಈ ವೇಳೆ, ಮಾಜಿ ಸೈನಿಕರಾದ ವೆಂಕಟೇಶ್ ಗುಗ್ಗರಿ,ಎ.ಕೆ.ಬೆಲ್ಲದ, ಕೊಟ್ರೇಶ‌ ಅಂಗಡಿ, ಶೇಖಪ್ಪ ಜುಟ್ಲನ್ನವರ್. ರುದ್ರಪ್ಪ ಬನ್ನಿಕೊಪ್ಪ, ಅಡಿವೆಪ್ಪ ಚಲವಾದಿ, ಡಿ.ಜಿ ಪೂಜಾರ್, ಧ್ರುವ ಕುಮಾರ್ ಹೂಗಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb