Headlines

ಪೆಟ್ರೋಲ್‌ ಹಾಕಿಸಲು ಬಂದವರು ಹಲ್ಲೆ ಮಾಡಿದರು!

ಗದಗ: ಚಿಲ್ಲರೆ ವಿಷಯವಾಗಿ ಪುಂಡರ ಗುಂಪೊಂದು ಬಂಕ್ ಸಿಬ್ಬಂದಿಗಳ‌ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ.

ಪೆಟ್ರೋಲ್ ಹಾಕಿಸಲು ಬಂದಾಗ ಈ ಘಟನೆ ಜರುಗಿದ್ದು, ಸಿಬ್ಬಂದಿಗಳ ಮೇಲೆ ಪುಡಿ ರೌಡಿಗಳಂತೆ ಬಂದ ಪುಂಡರು,‌ ಪೆಟ್ರೋಲ್ ಬಂಕ್ ಸಿಬ್ಬಂದಿಗಳನ್ನ ಥಳಿಸಿದ್ದಾರೆ.

ಪುಂಡರ ಅಟ್ಟಹಾಸದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ಸಿಬ್ಬಂದಿಯನ್ನ ಜೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Leave a Reply

Your email address will not be published. Required fields are marked *