Home » News » ಮತ್ತೇ ನಗರಸಭೆ ಬಿಜೆಪಿ ಸದಸ್ಯರ ಸದಸ್ವತ್ವ ರದ್ದು! ಹಾವು ಏಣಿ ಆಟವಾದ ಕಾನೂನು‌ ಸಚಿವರ ಕ್ಷೇತ್ರದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ! ಒಂದೇ ರಾತ್ರಿಯಲ್ಲಿ ಮುದುಡಿತು ಕಮಲದ ಕನಸು!

ಮತ್ತೇ ನಗರಸಭೆ ಬಿಜೆಪಿ ಸದಸ್ಯರ ಸದಸ್ವತ್ವ ರದ್ದು! ಹಾವು ಏಣಿ ಆಟವಾದ ಕಾನೂನು‌ ಸಚಿವರ ಕ್ಷೇತ್ರದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ! ಒಂದೇ ರಾತ್ರಿಯಲ್ಲಿ ಮುದುಡಿತು ಕಮಲದ ಕನಸು!

by CityXPress
0 comments

ಗದಗ:ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗದಗ ಬೆಟಗೇರಿ ನಗರಸಭೆಯ ಎರೆಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮತ್ತಷ್ಟು ಹಾವು ಮುಂಗಸಿಯ ಕಾಳಗದ ಸ್ವರೂಪ ಪಡೆದಕೊಂಡಿದೆ.

ಇನ್ನೇನು‌ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಬಿಜೆಪಿ ಸದಸ್ಯರಿಗೆ ಶಾಕ್ ಎದುರಾಗಿದೆ.ಹೌದು, ಈಗಾಗಲೇ ಸದಸ್ಯತ್ವ ರದ್ದಿನ ಬೀಸೋ‌ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ ನಗರಸಭೆ ಮೂವರು ಬಿಜೆಪಿ ಸದಸ್ಯರಿಗೆ ದೊಣ್ಣೆ ಏಟು ಜೋರಾಗಿಯೇ ಬಂದು ಅಪ್ಪಳಿಸಿದೆ.

ನಗರಸಭೆ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನೀಲ್ ಅಬ್ಬಿಗೇರಿ, ಹಾಗೂ ಗೂಳಪ್ಪ ಮುಶಿಗೇರಿ ಈ ಮೂವರ ಸದಸ್ಯತ್ವವನ್ನ ಮತ್ತೇ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ‌ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ದಿ. 27-02-2025 ರಂದು ಆದೇಶ ಹೊರಡಿಸಿದ್ದಾರೆ.

banner

ಇದರಿಂದ ದಿ.28-02-2025 ರಂದು ನಡೆಯುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಮೂವರು ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಂತಾಗಿದೆ. ಇದರಿಂದ ಬಹುಮತದೊಂದಿಗೆ ನಗರಸಭೆ ಅಧಿಕಾರ ಈ ಬಾರಿಯೂ ನಮ್ಮದೇ ಎಂದು ಕನಸು ಕಾಣುತ್ತಿದ್ದ ಬಿಜೆಪಿ‌ ಸದಸ್ಯರಿಗೆ ಒಂದೇ‌ ರಾತ್ರಿಯಲ್ಲಿ ಕನಸು ಭಗ್ನಗೊಂಡಿದೆ. ಅಲ್ಲದೇ ಬಿಜೆಪಿ ಸದಸ್ಯರ ಸಂಖ್ಯಾಬಲ 15 ಕ್ಕೆ ಕುಸಿದಿದ್ದು, ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯಾಬಲ 17 ಇರುವದರಿಂದ ಬಹುತೇಖವಾಗಿ ಎರಡನೇ ಅವಧಿಯ ನಗರಸಭೆ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಕೈ ಸೇರುವದು ನಿಶ್ಚಿತವಾಗಿದೆ.

ಇನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರ ಸದಸತ್ವ ರದ್ದತಿ ಆದೇಶಕ್ಕೂ‌ ಕೆಲವೇ ಗಂಟೆಗಳ ಮುಂಚೆ (27-02-2025) ರಂದು ಬಿಜೆಪಿಯ ಮೂವರು‌ ಸದಸ್ಯರಿಗೆ ಮತ್ತೊಮ್ಮೆ ಜಾಕ್ ಪಾಟ್ ಸಿಕ್ಕಂತಾಗಿತ್ತು.‌ಕಾರಣ (ದಿ.28-02-2025) ರಂದು ನಡೆಯುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಮತದಾನಕ್ಕೆ ಧಾರವಾಡ ಹೈಕೋರ್ಟ್ ಪೀಠ ಅವಕಾಶ ಕಲ್ಪಿಸಿತ್ತು.‌ ಆದರೆ  ಆದೇಶದ ಮೊದಲನೇ ಸಾಲಿನಲ್ಲಿಯೇ “ಪ್ರಾದೇಶಿಕ ಆಯುಕ್ತರು ಹೊರಡಿಸಿದ ಯಾವುದೇ ಆದೇಶಗಳಿಗೆ ಒಳಪಟ್ಟು‌” ಎನ್ನುವ ಸೂಚನೆ ನೀಡಿ ಚುನಾವಣೆಯಲ್ಲಿ‌ ಭಾಗವಹಿಸಲು‌ ಹಾಗೂ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿತ್ತು.

ಈ ರೀತಿಯಾಗಿ ನ್ಯಾಯಾಲಯ ಮೂವರು ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು. ಇದರಿಂದ ಬಿಜೆಪಿ ಪಕ್ಷದ‌ ಸದಸ್ಯರು ನಗರಸಭೆಯಲ್ಲಿ ಮತ್ತೊಮ್ಮೆ ಬಿಜೆಪಿ‌ ಬಾವುಟ ಹಾರಿಸಲು ಸಜ್ಜಾಗಿದ್ದರು. ಆದರೆ ಅಷ್ಟೆಲ್ಲ ಕಸರತ್ತುಗಳ ನಡುವೆಯೂ ಇವರ ಕನಸು ಒಂದೇ‌ ರಾತ್ರಿಯಲ್ಲಿ‌ ಭಗ್ನಗೊಂಡಿತ್ತು.

ಯಾಕೆಂದರೆ ಮತದಾನಕ್ಕೆ ಅವಕಾಶ ನೀಡಿದೆ ಎನ್ನುವ ಸುದ್ದಿ ಹೊರಬಂದ ಕೆಲವೇ ಕೆಲವು ಗಂಟೆಗಳ ಕಳೆಯುವಷ್ಟರಲ್ಲಿ, ಬೆಳಗಾವಿ‌ ಪ್ರಾದೇಶಿಕ ಆಯುಕ್ತರಿಂದ ಬಿಜೆಪಿ ಮೂವರು‌ ಸದಸ್ಯರ ಸದಸ್ವತ್ವವನ್ನ ಮತ್ತೊಮ್ಮೆ ರದ್ದುಗೊಳಿಸಿದ ಆದೇಶದ ಪ್ರತಿ ಇವರ ಕೈಗೆ ಸೇರಿತ್ತು. ಆ ಮೂಲಕ ಮತ್ತೊಂದು ಆಘಾತಕಾರಿ ಬೆಳವಣಿಗೆ ಬಿಜೆಪಿ ಪಕ್ಷದ ಅಧಿಕಾರದ ಕನಸನ್ನ ಛಿದ್ರವಾಗಿಸಿತ್ತು.

ಒಟ್ಟಾರೆ ಇಂದು ಮಧ್ಯಾಹ್ನ ಚುನಾವಣೆ ನಡೆಯಲಿದ್ದು,‌ ಎರೆಡೂ ಪಕ್ಷಗಳೂ ಮುಂದೆ ಮತ್ತಾವ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತವೆಯೋ ಕಾದು ನೋಡಬೇಕು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb