ಲಕ್ಷ್ಮೇಶ್ವರ: ಪಟ್ಟಣದ ಬಾಲಾಜಿ ಆಸ್ಪತ್ರೆ ಮತ್ತು ತಹಶಿಲ್ದಾರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ರಾಜ್ಯ ಘಟಕದ ವತಿಯಿಂದ ಮುದ್ರಣಗೊಂಡ 2026ನೇ ಸಾಲಿನ ಕ್ಯಾಲೆಂಡರ್ನ್ನು ಶಾಸಕ ಡಾ. ಚಂದ್ರು ಲಮಾಣಿ ಹಾಗೂ ತಹಶಿಲ್ದಾರ ಧನಂಜಯ.ಎಂ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.
ವರದಿ : ಪರಮೇಶ ಎಸ್ ಲಮಾಣಿ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ ಅವರು, “ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನಿರಂತರ ಹಿತಸಾಧನೆ, ಸೇವಾ ಭದ್ರತೆ ಹಾಗೂ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಬಲಪಡಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಸಂಘದ ಕ್ಯಾಲೆಂಡರ್ವು ಕೇವಲ ದಿನಾಂಕಗಳ ಸಂಕಲನ ಮಾತ್ರವಲ್ಲ, ಸರ್ಕಾರದ ಯೋಜನೆಗಳು, ನೌಕರರ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸುವ ಮಹತ್ವದ ದಾಖಲೆ ಆಗಿದೆ. ನೌಕರರು ಜನಸೇವೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗಲಿದೆ” ಎಂದು ಹೇಳಿದರು.
ನಂತರ ಮಾತನಾಡಿದ ತಹಶಿಲ್ದಾರ ಧನಂಜಯ. ಎಂ ಕಾರ್ಯಕ್ರಮವು ಸಂಘಟಿತ ಸರ್ಕಾರಿ ನೌಕರರ ಶಕ್ತಿ ಹಾಗೂ ಸೇವಾಭಾವವನ್ನು ಪ್ರತಿಬಿಂಬಿಸಿದ ಮಹತ್ವದ ವೇದಿಕೆಯಾಗಿದ್ದು, 2026ನೇ ಸಾಲಿನಲ್ಲಿ ನೌಕರರ ಹಿತಸಾಧನೆಗೆ ಹೊಸ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷರಾದ ಗುರುರಾಜ ಹವಳದ,ನಿಕಟ ಪೂರ್ವ ಅಧ್ಯಕ್ಷರಾದ ಡಿ ಹೆಚ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಮ್ ಎ ನದಾಫ, ಖಜಾಂಚಿ ಎಮ್ ಡಿ ವಾರದ, ರಾಜ್ಯ ಪರಿಷತ್ ಸದಸ್ಯರಾದ ಎ ಬಿ ಗೌಡರ, ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ನಿರ್ದೇಶಕರಾದ ಮಂಜುನಾಥ ಕೊಕ್ಕರಗುಂದಿ, ಎ ಎಮ್ ಅಕ್ಕಿ, ಬಿ ಎಮ್ ಯರಗುಪ್ಪಿ, ಪಿ ಎ ಸನದಿ, ಜಿ ವಿ ಕುಂಬಾರ,ಎಮ್ ಎ ಶಿರಹಟ್ಟಿ, ಎಫ್ ಬಿ ಹೂಗಾರ,ಎ ಡಿ ಸೋಮನಕಟ್ಟಿ, ಶ್ರೀಮತಿ ಎಲ್ ಎನ್ ನಂದೆಣ್ಣವರ, ಶ್ರೀಮತಿ ಗೀತಾ ಹಳ್ಯಾಳ, ಎಮ್ ಎಸ್ ಹಿರೇಮಠ, ನವೀನ್ ಅಂಗಡಿ, ವಾಯ್ ಎಸ್ ತಿರಕಣ್ಣವರ ಹಾಗೂ ಸಂಘದ ಸದಸ್ಯರು, ಕಾರ್ಯಕರ್ತರು ಇದ್ದರು.
