Home » News » ಆರ್‌ಸಿಬಿ ಸನ್ಮಾನ ಸಮಾರಂಭ ದುರಂತ: 11 ಯುವಕರ ಬಲಿ – ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

ಆರ್‌ಸಿಬಿ ಸನ್ಮಾನ ಸಮಾರಂಭ ದುರಂತ: 11 ಯುವಕರ ಬಲಿ – ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

by CityXPress
0 comments

ಗದಗ, ಜೂನ್ 5:ಐಪಿಎಲ್‌ನಲ್ಲಿ 18 ವರ್ಷಗಳ ಬಳಿಕ ವಿಜೇತತ್ವ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಾಧನೆಗೆ ರಾಜ್ಯಾದ್ಯಂತ ಜನರಲ್ಲಿ ಉತ್ಸಾಹದ ಅಲೆ ಎದ್ದಿತ್ತು. ಆದರೆ ಈ ಸಾಧನೆಗಾಗಿ ಸರ್ಕಾರ ಆಯೋಜಿಸಿದ ಸನ್ಮಾನ ಸಮಾರಂಭದ ಹೊರೆ 11 ಯುವಕರ ಪ್ರಾಣ ತೆಗೆದುಕೊಂಡಿರುವ ದುರಂತವಾಗಿ ಪರಿಣಮಿಸಿದೆ. ಈ ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ನಿರ್ಲಕ್ಷ್ಯತೆಯನ್ನು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ತೀವ್ರವಾಗಿ ಖಂಡಿಸಿದ್ದಾರೆ.

ಆರ್‌ಸಿಬಿ ತಂಡದ ಆಟಗಾರರನ್ನು ಗೌರವಿಸುವ ಉದ್ದೇಶದಿಂದ ವಿಧಾನಸೌಧದ ಮುಂದೆ ರಾಜ್ಯ ಸರ್ಕಾರ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಕ್ರೆಡಿಟ್ ತಮ್ಮದಾಗಿಸಿಕೊಳ್ಳಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗ್ರಹಿಸಿದ ಹಿನ್ನೆಲೆ ಈ ಅವಾಂತರ ಆಗಿದೆ ಎಂಬ ಆರೋಪವನ್ನು ಜೆಡಿಎಸ್ ಹೊರಹಾಕಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಉಪಮುಖ್ಯಮಂತ್ರಿ ಘೋಷಿಸಿದರೂ, ಕೇವಲ ಮೂರೇ ಗೇಟುಗಳನ್ನು ತೆರೆಯಲಾಗಿತ್ತು. ಇದರಿಂದಾಗಿ ವೇದಿಕೆಯ ಹೊರಗಡೆ ಅಪಾರ ಜನಸಂದಣಿ ಉಂಟಾಗಿ, ಕಾಲ್ತುಳಿತದಿಂದ 11 ಮಂದಿ ಯುವಕರು ದುರಂತವಾಗಿ ಸಾವಿಗೀಡಾಗಿದ್ದಾರೆ. ಕಾರ್ಯಕ್ರಮ ತಾತ್ಕಾಲಿಕವಾಗಿ ರೂಪಿಸಲಾಗಿದ್ದು, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೆಎಸ್‌ಸಿಎ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಸಂಪೂರ್ಣ ಗೊಂದಲದ ಹೊಣೆ ಸಚಿವರುಗಳ ನಿರ್ವಹಣಾ ದೌರ್ಬಲ್ಯಕ್ಕೇ ಸೇರಬೇಕೆಂದು ಜೆಡಿಎಸ್ ಆಗ್ರಹಿಸುತ್ತಿದೆ.

“ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ಹತ್ತು ಪಟ್ಟು ಹೆಚ್ಚು ಜನರ ಮಧ್ಯೆ ಸನ್ಮಾನ ಸಮಾರಂಭ ನಡೆದರೂ ಯಾವುದೇ ಅವಘಡಗಳಿಲ್ಲದೆ ಯಶಸ್ವಿಯಾಗಿ ಮುಕ್ತಾಯವಾಯಿತು. ಆದರೆ ಬೆಂಗಳೂರಿನಲ್ಲಿ ಕೇವಲ ಎರಡು ಲಕ್ಷ ಜನರನ್ನು ನಿರ್ವಹಿಸಲು ಸರ್ಕಾರ ವಿಫಲವಾಗಿದೆ” ಎಂದು ವೆಂಕನಗೌಡ ಟೀಕಿಸಿದ್ದಾರೆ.

banner

ಮುಂಬೈಯಲ್ಲಿ ಹಾಗೂ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಇದೇ ನಾಯಕರೇ ರಾಜಕೀಯ ವಿರೋಧ ವ್ಯಕ್ತಪಡಿಸಿದ್ದನ್ನು ನೆನಪಿಸಿ, ಇದೀಗ ತಾವು ರಾಜಕೀಯ ಮಾಡಬಾರದೆಂದು ಹೇಳುವುದು ನಿಗೂಢವೆಂದು ಅವರು ವ್ಯಂಗ್ಯವಾಡಿದ್ದಾರೆ. “ಅವರು ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದಿರಬೇಕಾದ ಸಂದರ್ಭದಲ್ಲೂ, ಅಭಿಮಾನಿಗಳ ಸಂಖ್ಯೆ ಬಗ್ಗೆ ಸ್ಪಷ್ಟ ಮುನ್ಸೂಚನೆ ನೀಡದಿರುವುದು ಅವರ ವೈಫಲ್ಯವೇ” ಎಂಬುದು ಅವರ ವಾದ.

ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕೆಂದು ಬಸವರಾಜ ಅಪ್ಪಣ್ಣವರ, ಎಂ.ಎಸ್. ಪಾರ್ವತಗೌಡ್ರ, ರಮೇಶ ಹುನಸಿಮರದ, ಸಂತೋಷ ಪಾಟೀಲ, ಪ್ರಫುಲ್ಲ ಪುನೀಕರ, ಪುಲಿಕೇಶಿ ಗಾಲಿ, ಜಿ.ಕೆ. ಕೊಳ್ಳಿಮಠ, ಮಂಜುಳಾ ಮೇಟಿ, ಸಿದ್ದಲಿಂಗಯ್ಯ ಹೊಂಬಾಳೆಮಠ, ಶರಣಪ್ಪ ಹೂಗಾರ ಮತ್ತು ಕಲ್ಕುಸಾ ಸಿಂಗ್ರಿ ಸೇರಿದಂತೆ ಹಲವಾರು ನಾಯಕರು ಒತ್ತಾಯಿಸಿದ್ದಾರೆ.

ಸರ್ಕಾರ ತನ್ನ ತಪ್ಪನ್ನು ಕೆಎಸ್‌ಸಿಎ ಮೇಲೆ ಹೊರಿಸಲು ಯತ್ನಿಸುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ನಡವಳಿಕೆ ಪ್ರಶ್ನಾರ್ಹವಾಗಿದೆ ಎಂಬ ಅಭಿಪ್ರಾಯ ರಾಜ್ಯದ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb