Home » News » ಎಸ್‌ಬಿಐ ಜನವನ – ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಒಂದು ಶ್ರೇಷ್ಠ ಪ್ರೇರಣಾದಾಯಕ ಹೆಜ್ಜೆ

ಎಸ್‌ಬಿಐ ಜನವನ – ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಒಂದು ಶ್ರೇಷ್ಠ ಪ್ರೇರಣಾದಾಯಕ ಹೆಜ್ಜೆ

by CityXPress
0 comments

ಗದಗದ ಕೆಎಸ್‌ಆರ್‌ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಹಚ್ಚಹಸಿರು ಪರಿಸರ ವಾತಾವರಣ ನಿರ್ಮಾಣದ ಯಶಸ್ವಿ ಪ್ರಯತ್ನ

ಗದಗ: ಪ್ರಕೃತಿಯ ಹಿತದೃಷ್ಟಿಯಿಂದ, ಪರಿಸರದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಮಹತ್ವಪೂರ್ಣ ಹಾದಿ ಹಿಡಿದಿರುವ ಯೋಜನೆಗಳಲ್ಲಿ ಎಸ್‌ಬಿಐ – ಜನವನ ಒಂದು ಸ್ಪಷ್ಟ ಬೆಳಕು ನೀಡುವ ಉದಾಹರಣೆ. ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ಕೆಎಸ್‌ಆರ್‌ಡಿಪಿಆರ್), ಗದಗ ಮತ್ತು ಸಂಕಲ್ಪ ಸಂಸ್ಥೆಯ ಸಹಯೋಗದೊಂದಿಗೆ, ಎಸ್‌ಬಿಐ ಫೌಂಡೇಶನ್‌ನ ‘ಜನವನ’ಯೋಜನೆ ಮೂರು ವರ್ಷಗಳ ಹಿಂದೆ ೧೪ ಎಕರೆ ಭೂಮಿಯಲ್ಲಿ ಆರಂಭಗೊಂಡಿತು.

ಈ ಕಾಲಾವಧಿಯಲ್ಲಿ ಸುಮಾರು ೧೯,೨೦೦ಕ್ಕೂ ಹೆಚ್ಚು ಗಿಡಗಳು ನೆಡಲಾಗಿದ್ದು, ಪರಿಸರ ಉಳಿವಿಗೆ ಮತ್ತು ಹಸಿರು ಬೆಳವಣಿಗೆಗೆ ನಿಜವಾದ ಪ್ರೇರಣೆಯಾಗಿವೆ. ವಾತಾವರಣದ ಶುದ್ಧತೆಯೇ ಅಲ್ಲದೇ, ಜನರ ಆರೋಗ್ಯ ಮತ್ತು ಹಸಿರಿನ ಆಶ್ರಯದ ಕೇಂದ್ರವಾಗಿ ಈ ಸ್ಥಳ ಬೆಳೆದಿದೆ.

ಮೂಲಸೌಕರ್ಯಗಳ ವಿಶಿಷ್ಟ ಅಭಿವೃದ್ದಿ

banner

ಈ ಹಸಿರು ಭೂಮಿಯಲ್ಲಿ ಹಲವಾರು ಮೂಲಭೂತ ಸೌಕರ್ಯಗಳು ಕಲ್ಪಿಸಲ್ಪಟ್ಟಿವೆ:

ಚೆಕ್ ಡ್ಯಾಂ ನಿರ್ಮಾಣ

ಓಪನ್ ಜಿಮ್ ಮತ್ತು ಓಪನ್ ಮೀಟಿಂಗ್ ಸ್ಥಳ

ಬೋರ್​ವೆಲ್ ಮತ್ತು ಬೋರ್ವೆಲ್ ರೀಚಾರ್ಜ ಯುನಿಟ್ ಸ್ಥಾಪನೆ

ಮಣ್ಣು ಜಾರಿಕೆ ತಡೆಯುವ ಟ್ರೆಂಚ್ ಹಾಗೂ ಗಲ್ಲಿಪ್ಲಗ್ ನಿರ್ಮಾಣ

ಸೌರಶಕ್ತಿ ಆಧಾರಿತ ಬೆಳಕುಗಳ ಸ್ಥಾಪನೆ

ವಿಶ್ರಾಂತಿಗಾಗಿ ಸಿಮೆಂಟ್ ಬೆಂಚುಗಳ ವ್ಯವಸ್ಥೆ

ಈ ಎಲ್ಲವುಗಳು ಈ ಪರಿಸರ ಪ್ರದೇಶವನ್ನು ಪರಿಸರ ಅಭಿಮಾನಿಗಳಿಗೆ ಮತ್ತು ಆರೋಗ್ಯಪರ ಚಟುವಟಿಕೆಗಳನ್ನು ನಡೆಸುವವರಿಗೆ ಪರಿಪೂರ್ಣ ಸ್ಥಳವನ್ನಾಗಿ ಮಾಡಿದ್ದಾರೆ.

ನೀರಿನ ಪೂರೈಕೆಯಲ್ಲಿ ಆದರ್ಶ ನಿರ್ವಹಣೆ

ಬೇಸಿಗೆಯ ತೀವ್ರತೆಗೆ ನಿರಾಳವಾಗಿ, ಹೊರಗಿನಿಂದ ತಿಂಗಳಿಗೆ ೨೦–೨೫ ಟ್ಯಾಂಕರ್‌ಗಳ ಮೂಲಕ ನೀರು ತಂದು ಪ್ರತಿಯೊಂದು ಗಿಡಕ್ಕೂ ಸಮರ್ಪಕವಾಗಿ ಪೂರೈಸಲಾಗಿದೆ. ಅತೀ ಕಡಿಮೆ ಕಾಲವಧಿಯಲ್ಲಿಯೂ ಗಿಡಗಳು ಪೋಷಣೆಯುತವಾಗಿ ಬೆಳೆದಿದ್ದು, ಪ್ರತಿ ಗಿಡವೂ ಜೀವಂತವಾಗಿ ಪರಿಸರದ ಭಾಗವಾಗಿದೆ.

ಇನ್ನು ಮುಂಬರುವ ಸಮಯದಲ್ಲಿ ಈ ನೀರಿನ ಕೊರತೆಯ ಸಮಸ್ಯೆಗೆ ಮುಂಜಾಗ್ರತಾ ಕ್ರಮವಾಗಿ ಟ್ವಿನ್ ರಿಂಗ್ ರೀಚಾರ್ಜ್ ವಿಧಾನ ಅಳವಡಿಸಿ, ಭೂಗತ ಜಲಮಟ್ಟವನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.

ಸಾರ್ವಜನಿಕ ಉಪಯೋಗಕ್ಕೆ ಶ್ರೇಷ್ಠ ಸ್ಥಳ

ಇಲ್ಲಿ ನಿರ್ಮಿತವಾಗಿರುವ ಓಪನ್ ಮೀಟಿಂಗ್ ಸ್ಥಳ, ಜನರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನ್ಮದಿನದ ಆಚರಣೆ ಮುಂತಾದ ಸಂಭ್ರಮಗಳಿಗೆ ಸೂಕ್ತವಾದ ಸ್ಥಳವಾಗಿದೆ. ಮಳೆಗಾಲದಲ್ಲೂ ತೊಂದರೆಯಾಗದಂತೆ ಶೀಟ್ ಮತ್ತು ಪರದೆಯ ವ್ಯವಸ್ಥೆ ಮಾಡಲಾಗಿದೆ. ಓಪನ್ ಜಿಮ್‌ನಲ್ಲಿ ಅನೇಕ ವ್ಯಾಯಾಮ ಉಪಕರಣಗಳಿರುವುದರಿಂದ ಸ್ಥಳೀಯ ಜನತೆ ಹಾಗೂ ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬಹುದಾಗಿದೆ.

ಪರಿಸರ ಸಂರಕ್ಷಣೆಗಾಗಿ ವಿಜ್ಞಾನಾಧಾರಿತ ಕ್ರಮ

ಪ್ರತಿಯೊಂದು ಗಿಡಕ್ಕೂ ಗಲ್ಲಿಪ್ಲಗ್ ಮತ್ತು ಟ್ರೆಂಚ್ ನಿರ್ಮಿಸುವ ಮೂಲಕ ಮಣ್ಣು ಧುಳಿಯದಂತೆ, ನೀರಿನ ಹರಿವು ನಿಯಂತ್ರಣದಂತೆ ಮಾಡಲಾಗಿದೆ. ಈಗಾಗಲೇ ಮೂರು ಬಾರಿ ಬೆಂಕಿ ಸಂಭವಿಸಿದರೂ ಟ್ರೆಂಚ್‌ಗಳ ಸುತ್ತಲಾಗಿ ಸಂರಕ್ಷಣೆ ನೀಡಿದ ಪರಿಣಾಮದಿಂದ ಈ ಪ್ರದೇಶಕ್ಕೆ ಯಾವುದೇ ನಷ್ಟವಾಗಿಲ್ಲ.

ಸಾಮಾಜಿಕ ಹಾಗೂ ಪರಿಸರ ಬದ್ಧತೆ

ಎಸ್‌ಬಿಐ ಫೌಂಡೇಶನ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸಂಜಯ್ ಪ್ರಕಾಶ್ ಅವರು ಹಂಚಿಕೊಂಡಂತೆ, “ಅತ್ಯಂತ ಹಾನಿಗೊಳಗಾಗುತ್ತಿರುವ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ ನಮಗೆ ಮುಖ್ಯ. ಜನವನ ಯೋಜನೆ ಹಾಗೂ ಗ್ರಾಮ ಶಕ್ತಿಶಾಲಿ ಜಲ ಯೋಜನೆಗಳು ಜಲಮಟ್ಟ ಸುಧಾರಣೆ ಹಾಗೂ ಹಸಿರನ್ನು ವೃದ್ಧಿಸಲು ಸಹಕಾರಿಯಾಗಿವೆ.”

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸುರೇಶ ವಿ. ನಾಡಗೌಡರ ಅವರು ಸಂತೋಷದಿಂದ “ಎಸ್‌ಬಿಐ ಫೌಂಡೇಶನ್ ಮತ್ತು ಸಂಕಲ್ಪ ಸಂಸ್ಥೆಯ ಸಹಕಾರದಿಂದ ಈ ಹಸಿರು ಹವಾಮಾನವು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಶ್ರೇಷ್ಠ ವಾಯು ವಿಹಾರ ಸ್ಥಳವಾಗಿದೆ. ಇದು ಪರಿಸರ ಹಾಗೂ ಶುದ್ಧತೆಯ ಪರಿಪೂರ್ಣ ಮಾದರಿಯಾಗಿದೆ.” ಎಂದುತಿಳಿಸಿದ್ದಾರೆ:

ಸಂಸ್ಥೆಯ ಪ್ರತಿನಿಧಿ ಶ್ರೀ ಸಿಕಂದರ್ ಮೀರಾನಾಯ್ಕ್ ಅವರು ಸಂತಸಪೂರ್ವಕವಾಗಿ, “ಈ ಮಹತ್ವದ ಯೋಜನೆಗೆ ಅವಕಾಶ ನೀಡಿದ ಫೌಂಡೇಶನ್ ಹಾಗೂ ವಿಶ್ವವಿದ್ಯಾಲಯಕ್ಕೆ ನಮ್ಮ ಋಣಪತ್ರವಿದೆ. ಇಂತಹ ಯೋಜನೆಗಳು ಇನ್ನೂ ಅನೇಕ ಸ್ಥಳಗಳಲ್ಲಿ ನಡೆಯಲಿ ಎಂಬುದು ನಮ್ಮ ಆಶಯ,” ಎಂದರು.

ಒಟ್ಟಾರೆ ಎಸ್‌ಬಿಐ – ಜನವನ ಯೋಜನೆ ಎನ್ನುವುದು ಪರಿಸರ ಸಂರಕ್ಷಣೆಗೆ, ಜನರ ಆರೋಗ್ಯಕ್ಕೆ, ಸಮುದಾಯದ ಸಬಲೀಕರಣಕ್ಕೆ ಉದಾಹರಣೆಯಾದ ಮಾದರಿ ಯೋಜನೆಯಾಗಿದೆ. ಹಸಿರಿನ ಮಧ್ಯೆ ಜನತೆಯ ಬದುಕು ಹಸನಾಗಿ ರೂಪುಗೊಳ್ಳಲಿ ಎಂಬ ಆಶಯವೇ ಇದರ ಹಿಂದಿರುವ ಉದ್ದೇಶವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb