Home » News » ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆ: ರಾಜಕೀಯ ಜತೆಗೆ ವಿಧಾನಸಭಾ ಪ್ರಕ್ರಿಯೆಯ ಶಿಸ್ತುಪಾಠಕ್ಕೂ ಸುಲಭವಾದ ತಿರುವು..

ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆ: ರಾಜಕೀಯ ಜತೆಗೆ ವಿಧಾನಸಭಾ ಪ್ರಕ್ರಿಯೆಯ ಶಿಸ್ತುಪಾಠಕ್ಕೂ ಸುಲಭವಾದ ತಿರುವು..

by CityXPress
0 comments

ರಾಜ್ಯ ರಾಜಕೀಯ ವಲಯದಲ್ಲಿ ಕಳೆದ ಎರಡು ತಿಂಗಳಿನಿಂದ ಚರ್ಚೆಗೆ ಕಾರಣವಾಗಿದ್ದ 18 ಬಿಜೆಪಿ ಶಾಸಕರ ಅಮಾನತು ಪ್ರಕರಣಕ್ಕೆ ಅಂತ್ಯಕಂಡಿದ್ದು, ಸ್ಪೀಕರ್ ಯು.ಟಿ. ಖಾದರ್ ನೇತೃತ್ವದ ಸಂಧಾನ ಸಭೆಯಲ್ಲಿ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಈ ತೀರ್ಮಾನವು ಕೇವಲ ರಾಜಕೀಯ ಬದಲಾವಣೆ ಮಾತ್ರವಲ್ಲ, ಸದನದ ಗಂಭೀರತೆಯ ಉಳಿವು, ಶಾಸಕರ ನಡತೆಯ ವಿಚಾರದಲ್ಲಿ ಎಚ್ಚರಿಕೆಯನ್ನು ತೋರಿಸುವಂತದ್ದು ಎಂಬುದು ವಿಶ್ಲೇಷಕರ ಅಭಿಪ್ರಾಯ.

ಸಂದರ್ಭದ ಮಹತ್ವವನ್ನು ಗ್ರಹಿಸಿದಂತೆ, ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ನಡೆದ ಈ ಮಹತ್ವದ ಸಂಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಹಾಗೂ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಭಾಗವಹಿಸಿದ್ದರು. ಸಕಾಲದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳುವುದು ರಾಜ್ಯ ಆಡಳಿತಾತ್ಮಕ ಪ್ರಜಾಪ್ರಭುತ್ವದ ಬಲವಾದ ನಿದರ್ಶನ ಎಂಬ ಭಾವನೆ ಸಭೆಯ ನಿರ್ಧಾರದಿಂದ ಹೊರಹೊಮ್ಮಿತು.

banner

ಮಾರ್ಚ್ 21ರಂದು ನಡೆದ ಬಜೆಟ್ ಅಧಿವೇಶನದ ವೇಳೆ, ಹನಿಟ್ರ್ಯಾಪ್ ವಿಚಾರ ಹಾಗೂ ಮುಸ್ಲಿಂ ಮೀಸಲಾತಿ ಕುರಿತ ಚರ್ಚೆ ವೇಳೆ ವಿಧಾನಸಭೆಯಲ್ಲಿ ಗಲಾಟೆ ಉಲಿಬಿದ್ದರು. ವಿಪಕ್ಷದ ಬಿಜೆಪಿ ಶಾಸಕರು ವಿಧಾನಸಭೆಯ ಶಿಸ್ತಿಗೆ ಧಕ್ಕೆಯಾದ ರೀತಿಯಲ್ಲಿ ಸ್ಪೀಕರ್‌ಗೆ ಪೇಪರ್ ಎಸೆದು, ಘೋಷಣೆಗಳನ್ನು ಕೂಗಿದ ನಂತರ ಅವರು ಅಮಾನತುಗೊಂಡಿದ್ದರು. ಈ ಘಟನೆ ವಿಧಾನಸಭೆಯ ಗಂಭೀರತೆಯನ್ನು ಪ್ರಶ್ನೆಯೊಳಪಡಿಸಿದ ಕ್ಷಣವಾಗಿತ್ತು.

ಸ್ಪೀಕರ್ ಖಾದರ್ ಹೇಳುವಂತೆ, “ಅಮಾನತು ಕೆಲವರು ತೋರಿದ ದುರ್ನಡತೆಯ ವಿರುದ್ಧ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆಯ ಫಲ. ಈಗ ಅವರು ವಿಷಾದ ವ್ಯಕ್ತಪಡಿಸಿರುವುದು ಶಿಸ್ತುಪಾಠದ ಜಯ. ಯಾವುದೇ ಷರತ್ತು ಇಲ್ಲದೆ, ಸದನದ ಉದ್ದೇಶ ಹಾಗೂ ಸಹಕಾರವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.”

ವಿಪಕ್ಷ ನಾಯಕ ಆರ್. ಅಶೋಕ್ ಈ ತೀರ್ಮಾನವನ್ನು ಸ್ವಾಗತಿಸಿದ್ದು, “ಸಿಎಂ, ಸ್ಪೀಕರ್ ಇಬ್ಬರೂ ಕೂಡ ವಿಷಯವನ್ನು ಶಾಂತಿಯುತವಾಗಿ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ಸದನದ ಶ್ರೇಯಸ್ಸಿಗಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಕೆಲಸ ಮಾಡಲು ಈ ನಿರ್ಧಾರ ನೆರವಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.

ಶಾಸಕರಾದ ದೊಡ್ಡನಗೌಡ ಪಾಟೀಲ್, ಡಾ. ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರಾಜು, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್, ಸಿ.ಕೆ. ರಾಮಮೂರ್ತಿ, ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗಾರ್, ಚನ್ನಬಸಪ್ಪ, ಬಸವರಾಜ ಮತ್ತಿಮೂಡ, ಎಸ್. ಆರ್. ವಿಶ್ವನಾಥ್, ಎಂ.ಆರ್. ಪಾಟೀಲ್ ಅವರನ್ನು ವಿಧಾನಸಭೆ ಕಲಾಪದಿಂದ ಆರು ತಿಂಗಳುಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ರೂಲಿಂಗ್ ಹೊರಡಿಸಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb