Home ರಾಜ್ಯ ಮುಂದೆ ಬನ್ನಿ ಎಂದ ಕಂಡಕ್ಟರ್: ಹಲ್ಲೆ‌ ನಡೆಸಿದ ದುಷ್ಕರ್ಮಿಗಳು..!

ಮುಂದೆ ಬನ್ನಿ ಎಂದ ಕಂಡಕ್ಟರ್: ಹಲ್ಲೆ‌ ನಡೆಸಿದ ದುಷ್ಕರ್ಮಿಗಳು..!

0
ಮುಂದೆ ಬನ್ನಿ ಎಂದ ಕಂಡಕ್ಟರ್: ಹಲ್ಲೆ‌ ನಡೆಸಿದ ದುಷ್ಕರ್ಮಿಗಳು..!

ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವಿಚಾರಕ್ಕೆ ಕಂಡಕ್ಟರ್ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮುಂಡರಗಿಯಿಂದ ಹಿರೇವಡ್ಡಟ್ಟಿಗೆ ಹೊರಡುತ್ತಿದ್ದ ಸಾರಿಗೆ ಇಲಾಖೆಯ ಬಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಡಕ್ಟರ್ ಶರಣಪ್ಪ ಬಿದರಹಳ್ಳಿ ಮೇಲೆ ಮೂವರು ದುಷ್ಕರ್ಮಿಗಳು ಶಾರೀರಿಕವಾಗಿ ಹಲ್ಲೆ ನಡೆಸಿದ್ದಾರೆ. “ಬಸ್ ಹತ್ತಿ ಮುಂದೆ ಬನ್ನಿ” ಎಂಬ ಸೂಚನೆ ನೀಡಿದ್ದಕ್ಕೆ ವಾಗ್ವಾದ ಉಂಟಾಗಿ, ನಂತರ ಅವರು ಹಲ್ಲೆಗೆ ಮುಂದಾಗಿದ್ದಾರೆ.

ಈ ಹಲ್ಲೆಯಲ್ಲಿ ಶರಣಪ್ಪ ಬಿದರಹಳ್ಳಿ ಅವರ ಕೈಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸಾರಿಗೆ ನೌಕರನ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here