ಗದಗ: ಸಚಿವ ಹೆಚ್ ಕೆ ಪಾಟೀಲರಿಗೆ ಮುಖ್ಯಮಂತ್ರಿ ಯೋಗ ಕೂಡಿ ಬರಲಿ ಅಂತ ಗದಗನಲ್ಲಿ ಚಿತ್ರದುರ್ಗ ಭೋವಿ ಗುರುಪೀಠ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಗದಗನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ತಮ್ಮ ಆಶಿರ್ವಚನದಲ್ಲಿ ಸ್ವಾಗತ ಕೋರುವ ವೇಳೆ, ಸಚಿವ ಹೆಚ್ ಕೆ ಪಾಟೀಲರಿಗೆ ಸಿಎಂ ಯೋಗ ಇತ್ತು ಎಂದ ಸ್ವಾಮೀಜಿ ಹೇಳಿದ್ರು. ಎಚ್ ಕೆ ಪಾಟೀಲರು ಎರೆಡು ಮೂರು ಬಾರಿ ಸಿಎಂ ಆಗಿರುತ್ತಿದ್ದರು. ಎಸ್ ಎಂ ಕೃಷ್ಣ ಆದ್ಮೇಲೆ ಸಿಎಂಗಾಗಿ ಹೆಸರು ಓಡಿದ್ದು ಎಚ್ ಕೆ ಪಾಟೀಲರದ್ದೇ, ತಡವಾಗಿಯಾದ್ರೂ ಎಚ್ ಕೆ ಪಾಟೀಲರಿಗೆ ಸಿಎಂ ಯೋಗ ಕೂಡಿ ಬರಲಿ ಎಂದು ಸ್ವಾಮಿಜಿ ತಮ್ಮ ಭಾಷಣ ಮುಂದುವರೆಸಿದರು.

ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಮಧ್ಯ ಪವರ್ ಶೇರಿಂಗ್ ಅಧಿಕಾರ ಹಂಚಿಕೆ ಚರ್ಚೆ ಜೋರಾಗಿದೆ. ಇದರ ಮಧ್ಯೆ ಹೆಚ್ ಕೆ ಪಾಟೀಲರ ಹೆಸರನ್ನ ಭೋವಿ ಪೀಠದ ಸ್ವಾಮಿಜಿ ಹರಿಬಿಟ್ಟಿದ್ದಾರೆ.