Home » News » ರೈಲಿನಡಿಗೆ ಬಿದ್ದು ಯುವಕ ಆತ್ಮಹತ್ಯೆ! ಹುಲಕೋಟಿ ಬಳಿ ಘಟನೆ!

ರೈಲಿನಡಿಗೆ ಬಿದ್ದು ಯುವಕ ಆತ್ಮಹತ್ಯೆ! ಹುಲಕೋಟಿ ಬಳಿ ಘಟನೆ!

by CityXPress
0 comments

ಗದಗ:ಯುವಕನೋರ್ವ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ತಾಲೂಕಿನ ಹುಲಕೋಟಿ – ಬಿಂಕದಕಟ್ಟಿ ನಡುವಿನ ರೈಲ್ವೇ ಹಳಿ ಮೇಲೆ ನಡೆದಿದೆ.

ಇಂದು ಮಧ್ಯಾಹ್ನದ ವೇಳೆ ಈ ಘಟನೆ ಜರುಗಿದೆ. ಗುರುನಾಥ ಬಸಪ್ಪ ಕುರ್ತಕೋಟಿ (28) ಅನ್ನುವ ಯುವಕ ಮೃತ ದುರ್ದೈವಿಯಾಗಿದ್ದು, ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ನಿವಾಸಿಯಾಗಿದ್ದಾನೆ.‌

ಚಾಲಕನಾಗಿ ಕೆಲಸ ಮಾಡುತ್ತಿದ್ದ ಗುರುನಾಥ, ನಿನ್ನೆ ಸವದತ್ತಿ ಯಲ್ಲಮ್ಮನ ಜಾತ್ರೆ ಮುಗಿಸಿ, ಮನೆಗೆ ಬಂದಿದ್ದ.‌ ಬೆಳಿಗ್ಗೆ ಮನಯಿಂದ ಹೊರಬಂದಿದ್ದ ಯುವಕ, ಹುಬ್ಬಳ್ಳಿ-ವಿಜಯವಾಡ ರೈಲಿಗೆ ಅಡ್ಡ ಬಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಘಟನೆಯಿಂದ ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿಯೇ ರೈಲ್ವೆ ನಿಲುಗಡೆಗೊಂಡಿದೆ.

ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb