ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುವ ಪವಾಡಪುರುಷ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ಮಂತ್ರ ಮಹರ್ಷಿ ಡಾಕ್ಟರ್ ಸದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿವರ್ಷದಂತೆ ಅದ್ಧೂರಿಯಾಗಿ ಜರುಗಲಿದೆ.
ಇದೇ ಜ. 16 ರಂದು ಅತ್ಯಂತ ವಿಜೃಂಭಣೆಯಿಂದ ಶಂಭುಲಿಂಗೇಶ್ವರ ಮತ್ತು ಭಕ್ತ ಶಿರೋಮಣಿ ಬಸಮ್ಮ ತಾಯಿ ಪಲ್ಲಕ್ಕಿಯೊಂದಿಗೆ ಪ್ರಾರಂಭವಾಗಿ ದಿ.17 ರ ಸಂಜೆ 6:00 ಗಂಟೆಗೆ ಭವ್ಯ ರಥೋತ್ಸವ ಜರುಗಲಿದೆ.

ದಿ.18 ರಂದು ಐತಿಹಾಸಿಕ ಜಂಗಿ ಕುಸ್ತಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು
ಪುನೀತರಾಗಬೇಕೆಂದು ದೇವಸ್ಥಾನ ಪಂಚಕಮಟಿ ಅಧ್ಯಕ್ಷರಾದ ಸಂಗಪ್ಪ ಪಾಟೀಲ, ಉಪಾಧ್ಯಕ್ಷರಾದ ಬಸವರಾಜ್ ಬೋರಾಳೆ ಮತ್ತು ಕಾರ್ಯದರ್ಶಿಗಳಾದ ವೈಜಿನಾಥ ಹಚ್ಚಿ ತಿಳಿಸಿದ್ದಾರೆ.