Home » News » ಶಿರಹಟ್ಟಿ ಕರವೇ ಅಧ್ಯಕ್ಷರಾಗಿ ಶಿವು ಮಠದ ನೇಮಕ!

ಶಿರಹಟ್ಟಿ ಕರವೇ ಅಧ್ಯಕ್ಷರಾಗಿ ಶಿವು ಮಠದ ನೇಮಕ!

by CityXPress
0 comments

ಶಿರಹಟ್ಟಿ: ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ ಶಿರಹಟ್ಟಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಶಿವು ಮಠದ ಇವರನ್ನ ನೇಮಕ ಮಾಡಲಾಗಿದೆ.

ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಬ್ಬಿಗೇರಿ ಅವರು, ಈ ವೇಳೆ ಮಾತನಾಡಿ, ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಗದಗ ಜಿಲ್ಲೆಯಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸುವ ಬಗ್ಗೆ ಕಾರ್ಯಕರ್ತರಿಗೆ ತಿಳುವಳಿಕೆ ಮೂಡಿಸುವದರ ಮೂಲಕ, ಅತೀ ಹೆಚ್ಚು ಸಂಘಟನೆಯನ್ನ ಗದಗ ಜಿಲ್ಲೆಯಲ್ಲಿ ಮತ್ತು ತಾಲೂಕು ಅಧ್ಯಕ್ಷರ ಹೆಚ್ಚಿನ ಜವಾಬ್ದಾರಿವ ವಹಿಸಿ ಸಂಘಟನೆ ಬಲಪಡಿಸುವಂತೆ ತಾಲೂಕು ಅಧ್ಯಕ್ಷರಿಗೆ ಸೂಚಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ‌ ಮಾತನಾಡಿ, ಸಂಘಟನೆಯನ್ನ ಗ್ರಾಮ ಮಟ್ಟದಲ್ಲಿ ಹುಟ್ಟು ಹಾಕುವಂತಹ ಕೆಲಸವನ್ನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರುಗಳ ಜವಾಬ್ದಾರಿಯಾಗಿರುತ್ತದೆ. ಅದರ ಜೊತೆಗೆ ಸಂಘಟನೆಯನ್ನು ಗಟ್ಟಿಗೊಳಿಸುವಂತೆ ಕರವೇ ತಾಲೂಕು ಅಧ್ಯಕ್ಷರಿಗೆ ಸೂಚಿಸಿದರು.

ಈ ವೇಳೆ, ಗದಗ ಜಿಲ್ಲೆಯ ವಿವಿಧ ಸಂಘಟನೆಯ ಮುಖಂಡರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು‌ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb